ವಿಶ್ವಮಾನವ ಕುವೆಂಪು
ಋಷಿಪ್ರಜ್ಞೆ – ಕವಿಪ್ರತಿಭೆಗಳ ಅದ್ವೈತ ವ್ಯಕ್ತಿತ್ವದ ಕುವೆಂಪು ಕಾವ್ಯನಾಮ, ಕನ್ನಡಿಗರಿಗೆ ಒಂದು ರೋಮಾಂಚನ. ನಿರಂಕುಶ ನಿಲುವು, ಅನನ್ಯ ಅಂತರ್ಮುಖತೆಗಳಿಂದ ಎರಕಗೊಂಡ ಇವರು ಕನ್ನಡಿಗರ ಮನಸ್ಸನ್ನು ಉದ್ದಕ್ಕೂ ಆಳಿದುದು, ಇಂದು ಇತಿಹಾಸ – ಡಾ. ಎಂ.ಎಂ. ಕಲಬುರ್ಗಿ
ಕರ್ನಾಟಕ – ಕನ್ನಡ – ಕುವೆಂಪು ಈ ಮೂರೂ ಮುಪ್ಪರಿಗೊಂಡು ಇಪ್ಪತ್ತನೆಯ ಶತಮಾನದ ಕನ್ನಡಪ್ರಜ್ಞೆ ರೂಪುಗೊಂಡಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಹಾಗೆಂದು, ಕುವೆಂಪು ಅವರದು ಭೌಗೋಳಿಕ ಅರ್ಥದ ಕನ್ನಡ ನಾಡಿಗೆ ಮಾತ್ರ ಸೀಮಿತಗೊಂಡ ಆಂಶಿಕ ಪ್ರಜ್ಞೆಯಲ್ಲ; ಕೇವಲ ಭಾರತಕ್ಕೆ ಸೀಮಿತಗೊಂಡ ರಾಷ್ಟ್ರಪ್ರಜ್ಞೆಯೂ ಅಲ್ಲ; ಅವೆಲ್ಲವನ್ನೂ ಒಳಗೊಂಡ ವಿರಾಡ್-ವಿಶ್ವ ಪ್ರಜ್ಞೆ.ಅದುವೆ ಪೂರ್ಣದೃಷ್ಟಿ!
ಬದುಕು-ಬರಹದ ನಡುವಿನ ಗೆರೆಯನ್ನೇ ಅಳಿಸಿದ ಅದ್ವೈತ ಪ್ರಜ್ಞೆಯ -ಕುವೆಂಪು ಕಾವ್ಯನಾಮದ- ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರಂತಹ ಚೇತನ ವಿಶ್ವಸಾಹಿತ್ಯದಲ್ಲಿ ವಿರಳಾತಿ ವಿರಳ. ತಮ್ಮ ಬದುಕು-ಬರಹಗಳ ಮೂಲಕ, ಕನ್ನಡ ವಿವೇಕವನ್ನು ಶ್ರೀಮಂತಗೊಳಿಸುತ್ತಲೇ ವಿಶ್ವಮಾನವರಾಗಿ ವಿರಾಜಮಾನರಾಗಿದ್ದು ಇಂದು ಇತಿಹಾಸ. ಕನ್ನಡದ ನೆಲ ಸೃಷ್ಟಿಸಿದ ಪಂಪ, ಬಸವ ಮೊದಲಾದ ಮಾನವತಾವಾದಿ ಮತ್ತು ಪಂಪ, ಕುಮಾರವ್ಯಾಸಾದಿ ಮಹಾಕವಿ ಪರಂಪರೆಯನ್ನು ಉಜ್ವಲವಾಗಿಸಿದ ಹಾಗೂ ಕಾಲ-ದೇಶಗಳನ್ನು ಮೀರಿ ಮೆರೆದ ಧೀಮಂತ ಚೇತನದ ಸ್ಮರಣೆ ಕನ್ನಡಿಗರ ಪಾಲಿಗೆ ನಿತ್ಯೋತ್ಸವ. ’ಶ್ರೀ’ಯವರ ಹಾರೈಕೆಯಂತೆ ಸುಪಥವಾಗಿ ನಡೆದa
ಕುವೆಂಪು ’ಜೀವನರಥೋತ್ಸವ’ದ ಒಂದು ಮೆಲುಕು ಇಲ್ಲಿದೆ.
